Saturday, April 23, 2011

ತೊಟ್ಟಿಲು ತೂಗುತ್ತಿರುವ "ಕುಮಾರ"

ಅಯ್ಯೋ..ಕರ್ನಾಟಕದಲ್ಲಿ ಅದೆಷ್ಟು ರಾಜಕೀಯ ನಾಯಕರುಗಳು ಮಹಿಳೆಯರೊಡನೆ ಅಕ್ರಮ ಸಂಬಂಧ ಕುದುರಿಸಿ ಮನೆಯಲ್ಲಿ ತೊಟ್ಟಿಲು ತೂಗುತ್ತಿದ್ದಾರೋ..? ಆ ದೇವನೇ ಬಲ್ಲ.
ದಕ್ಷಿಣ ಕನ್ನಡ ಜಿಲ್ಲೆಯ ಸಾಲೆತ್ತೂರು ಗ್ರಾಮದ "ಪೊಣ್ಣು" ರಾಧಿಕಾಳೊಡನೆ "ವ್ಯವಹಾರ" ಕುದುರಿಸಿ ಮನೆಯಲ್ಲಿ ತೊಟ್ಟಿಲು ಕಟ್ಟಲು ವ್ಯವಸ್ಥೆ ಮಾಡಿದ ವ್ಯಕ್ತಿಯೆಂದರೆ ಅದು ಈ ದೇಶದ "ಮಣ್ಣಿನ ಮಗ(ಮುದ್ದೆ)" ಎಂದು ಕೊಚ್ಚಿಕೊಳ್ಳುತ್ತಿರುವ ದೇಶದ ಮಾಜಿ ಪ್ರಧಾನ ಮಂತ್ರಿ ಯಾಗಿದ್ದ ಹೆಚ್.ಡಿ. ದೇವೇಗೌಡನ ಸುಪುತ್ರ ಹೆಚ್.ಡಿ ಕುಮಾರಸ್ವಾಮಿ.ಅನಿತಾಳೊಡನೆ ಚೊಕ್ಕವಾಗಿ ಬಾಳಲು ತಿಳಿಯದ ಇಂತಹ ಹೊಲಸು ನಾಯಕರು ಇನ್ನು ನಮ್ಮನ್ನು ಆಳತೊಡಗಿದರೆ ಅದೆಷ್ಟು ಮನೆಯಲ್ಲಿ ತೊಟ್ಟಿಲು ಕಟ್ಟಬೇಕಾದೀತೋ ಏನೋ?..
ಆತ್ಮೀಯ ಪ್ರಜಾಪ್ರಭುಗಳೆ,
    ನನ್ನದೊಂದು ವಿನಂತಿ.ಮುಂದಿನ ಬಾರಿ ಚುನಾವಣೆಗೆ ಮತ ಕೇಳಲು ಮನೆ ಮನೆಗೆ ಬಂದಾಗ ಇಂತಹವರನ್ನು ಜಾಡಿಸಿ ಒದ್ದು ಓಡಿಸಿ.ಮುಂದೆ ಇಂತಹವರು ರಾಜಕೀಯದಲ್ಲಿ ಮುಖವನ್ನು ತೂರಬಾರದು.ಅದೆಷ್ಟು ಮಂದಿ ಯುವಕ-ಯುವತಿಯರು ನಿಷ್ಕಲ್ಮಶವಾಗಿ ಜನರ ಸೇವೆ ಮಾಡಲು ಹಾತೊರೆಯುತ್ತಿದ್ದಾರೋ ಏನೋ?ಅಂತಹವರನ್ನು ಚುನಾವಣೆಯಲ್ಲಿ ನಿಲ್ಲಿಸಿ ಬಹುಮತದಿಂದ ಗೆಲ್ಲಿಸಿ.ದೇಶವನ್ನು ಇಂತಹ ಕಾಮುಕರಿಂದ ರಕ್ಷಿಸಿ
                      ||ಭಾರತ್ ಮಾತಾ ಕೀ ಜೈ||
                          ||ಜೈ ಹಿಂದ್||

Monday, April 4, 2011

ಈ ಬಿ.ಡಿ.ಎ ನಿವೇಶನ ಯಡಿಯೂರಪ್ಪನ ಅಪ್ಪನ ಮನೆಯ ಗಂಟೇ?

ಇದು ನೋಡಿ ರಾಜಕೀಯ ಅಂದ್ರೆ..
 ಕರ್ನಾಟಕ ರಾಜ್ಯದಲ್ಲಿ ಅದೆ‍ಷ್ಟೋ ಮಂದಿ ಹೊಟ್ಟೆಗೆ ಹಿಟ್ಟಿಲ್ಲದೆ,ಮೈ ಮುಚ್ಚಲು ಬಟ್ಟೆಯಿಲ್ಲದೆ,ನೆಲೆಯೂರಲು ವಾಸ್ತವ್ಯದ ಮನೆಯಿಲ್ಲದೆ ಅಲೆಮಾರಿಗಳಂತೆ ಬಸ್ ಸ್ಟ್ಯಾಂಡಿನಲ್ಲೋ,ದೇವಸ್ಥಾನಗಳಲ್ಲೋ ಇನ್ನೂ ಎಲ್ಲೆಲ್ಲೋ ದಿನಕಳೆಯುತ್ತಿರುತ್ತಾರೆ. ಪಾಪ,ಅವರಿಗೆ ಗೊತ್ತೇ ಇರುವುದಿಲ್ಲ ಮರುದಿನ ನಮಗೆ ಬೆಳಿಗ್ಗೆಯಾಗುವುದೋ ಇಲ್ಲವೋ ಎನ್ನುವ ವಿಷಯ.ಇದಕ್ಕೆ ಮುಖ್ಯ ಕಾರಣವೆಂದರೆ ಅಭಿವೃದ್ಧಿ ಎನ್ನುವ ನೆಪದಲ್ಲಿ ಎಸ್.ಇ.ಝಡ್ ಮುಖಾಂತರ ರೈತರ ಹಚ್ಚ ಹಸುರಾಗಿದ್ದ ಭೂಮಿಯನ್ನು ಈ ಕುಲಗೆಟ್ಟ ರಾಜಕಾರಣಿಗಳು "ನುಂಗಿದ್ದು".
 ಅದೇನೇ ಇರಲಿ.ಮೊನ್ನೆ ಎಪ್ರಿಲ್ 2 ರಂದು ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಐ.ಸಿ.ಸಿ ಮುಖಾಂತರ ಸುಮಾರು 14 ಕೋಟಿ,ಹುಂದೈ ಅವರಿಂದ ಬೆಲೆಬಾಳುವ,ಇನ್ನೂ ಮಾರುಕಟ್ಟೆಗೆ ಬಿಡುಗಡೆಯಾಗದ verna ಕಾರು,ಇಂಡಿಕಾ ಸಂಸ್ಥೆಯಿಂದ ಇನ್ನೊಂದು ಕಾರು, ದೆಹಲಿ ಸರಕಾರದಿಂದ ಆಟಗಾರರಿಗೆ, ಕೋಚ್,ಸಿಬ್ಬಂದಿ ವರ್ಗದವರಿಗೆ,ಆಯ್ಕೆ ಸಮಿತಿಯ ಸದಸ್ಯರಿಗೆ ಹೆಣಭಾರದಷ್ಟು ಹಣ.......ಇನ್ನೂ ಏನೇನೋ ಇದೆ. ಸಾಲದೆಂಬಂತೆ ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರು ಎಲ್ಲಾ ಆಟಗಾರರಿಗೆ ಬಿ.ಡಿ.ಎ ನಿವೇಶನ ಕೊಡಲು ಹೊರಟಿದ್ದಾರೆ.? ಈ ಬಿ.ಡಿ.ಎ ನಿವೇಶನ ಯಡಿಯೂರಪ್ಪನ ಅಪ್ಪನ ಮನೆಯ ಗಂಟೇ?.ಕಾಮನ್ವೆಲ್ತ್ ನಲ್ಲಿ ಉತ್ತಮ ಸಾಧನೆ ಮಾಡಿದ ವಾಸ್ತವ್ಯಕ್ಕೆ ಯೋಗ್ಯವಲ್ಲದ ಮನೆಗಳಲ್ಲಿ ವಾಸಿಸುವ ಕರ್ನಾಟಕದ ಕ್ರೀಡಾಪಟುಗಳಿಗೆ ಇನ್ನೂ ನೀಡದ ನಿವೇಶನ ಈ ಆಟಗಾರರಿಗೆ ಅಗತ್ಯವಿತ್ತೇ?
ದೇಶವೇ ಹೆಮ್ಮೆ ಪಡುವಂತಹ ಸಾಧನೆ ಕ್ರಿಕೆಟ್ ಆಟಗಾರರು ಮಾಡಿದ್ದಾರೆ,ನಿಜ.ಕೋಟಿಗಟ್ಟಲೆ ಹಣ,ಅದೆಷ್ಟೋ ಬೆಲೆಬಾಳುವ ಕಾರುಗಳು,ಹಲವು ಕಡೆ ನಿವೇಶನಗಳು ಇರಬೇಕಾದರೆ ವಾಸ್ತವ್ಯಕ್ಕೆ ಮನೆಯಿಲ್ಲದ ಅದೆಷ್ಟೋ ಮಂದಿ ಹೊರಗಡೆ ಅಲೆಯುತ್ತಿರಬೇಕಾದರೆ,ಇರುವ ಸಣ್ಣ ಮನೆಯನ್ನು ಸರಕಾರ ಕೆಡವುತ್ತಿರಬೇಕಾದರೆ ಈ ಆಟಗಾರರಿಗೆ ಇಂತಹ ರಾಜಮರ್ಯಾದೆಯ ಅಗತ್ಯವಿದೆಯೇ? ಇದರ ವಿರುದ್ಧ ಹೊರಾಡುವ ಶಕ್ತಿ ಇಲ್ಲದಿರುವುದು ನಮ್ಮ ಅಸಹಾಯಕತೆಯೇ?

Monday, March 14, 2011

ವಿಟ್ಲವನ್ನು ವಿಠಲನೇ ಕಾಯಬೇಕಷ್ಟೆ

ಮೊದಲಿಗೇ ಹೇಳ್ತೇನೆ..ನಾನು ಯಾವುದೇ ಪಕ್ಷದ ಪರವೂ ಅಲ್ಲ;ವಿರೋಧಿಯೂ ಅಲ್ಲ.
೨೦೦೫ ರಿಂದ ಪ್ರಾರಂಭಗೊಂಡ ವಿಟ್ಲ ರಸ್ತೆ ಅಗಲೀಕರಣ ಪ್ರಕ್ರಿಯೆಗೆ ಇದುವರೆಗೆ ಪೂರ್ಣವಿರಾಮ ದೊರೆತಿಲ್ಲ.
ದಕ್ಷ ಜಿಲ್ಲಾಧಿಕಾರಿಯೆಂದು ಖ್ಯಾತಿಗೊಂಡ ಪೊನ್ನುರಾಜ್ ಸುಮಾರು ೩ ಕ್ಕೂ ಅಧಿಕ ಬಾರಿ ವಿಟ್ಲಕ್ಕೆ ಭೇಟಿ ನೀಡಿ ರಸ್ತೆ ಅಗಲೀಕರಣಕ್ಕೆ ಸಹಕಾರ ನೀಡದ ಕೆಲವು "ದೊ(ದ)ಡ್ಡ" ಮನುಷ್ಯರ ಜೊತೆ ಮಾತನಾಡಿದರು.ಆ ಭೇಟಿಯೆಂದರೆ ಎಮ್ಮೆ ಚರ್ಮಕ್ಕೆ ಪೆಟ್ಟು ಬಿದ್ದಂತೆ.ರಸ್ತೆ ಅಗಲೀಕರಣ ಪ್ರಕ್ರಿಯೆ ಮಿಸುಕಾಡಲೇ ಇಲ್ಲ.ಇದನ್ನರಿತ ಕುತಂತ್ರಿಗಳು ಪೊನ್ನುರಾಜ್ ಅವರನ್ನು ಎತ್ತಂಗಡಿ ಮಾಡಿಸಿದರು.ಬಳಿಕ ಬಂದ ಸುಬೋಧ್ ಯಾದವ್ ಒಮ್ಮೆ ವಿಟ್ಲಕ್ಕೆ ಭೇಟಿ ನೀಡಿದರೂ ರಸ್ತೆ ಅಗಲೀಕರಣ ಪ್ರಕ್ರಿಯೆ ಮಾತ್ರ ಶೂನ್ಯವಾಗಿಯೇ ಉಳಿದಿದೆ.
ಈ ನಡುವೆ ಕೆಲವು ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಅಂಗಡಿಗಳ ಮುಂಭಾಗ ಕೆಡವಿ ರಸ್ತೆ ಅಗಲೀಕರಣಕ್ಕೆ ತಮ್ಮ ಕೊಡುಗೆಯನ್ನು ನೀಡಿದರು.ಆದರೆ ಇದರಿಂದಾಗಿ ವಿಟ್ಲದ ಸಂಚಾರ ವ್ಯವಸ್ಥೆ ಮತ್ತಷ್ಟು ಹದೆಗೆಟ್ಟು ಹೋಯಿತೇ ವಿನಹ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ..
ವಿಟ್ಲಕ್ಕೆ ಐತಿಹಾಸಿಕವಾದ ಸ್ಥಾನವಿದೆ.ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅತ್ಯಂತ ದೊಡ್ಡ ಗ್ರಾಮ ಪಂಚಾಯತ್ ವ್ಯವಸ್ಥೆ ಹೊಂದಿದೆ.ಗ್ರಾಮ "ಶುದ್ಧ"ವಾಗಿರದಿದ್ದರೂ ರಾಷ್ಟ್ರಪತಿಗಳ ಕೈಯಿಂದ "ಶುದ್ಧ ಗ್ರಾಮಪಂಚಾಯತ್ " ಪ್ರಶಸ್ತಿ ಗಳಿಸಿದೆ.ಇಂತಿಪ್ಪ ವಿಟ್ಲದ ಕುಲಗೆಟ್ಟು ಹೋದ ರಸ್ತೆಗಳಿಗೆ ಮೋಕ್ಷವೆಂದು?

Sunday, January 30, 2011

ನೀವೇ ಉತ್ತರಿಸಿ!!

"ಎಲ್ಲಿದೆ ವಾಜಪೇಯಿಯವರ ಆದರ್ಶ?"
-ಇದು ಇಂದು ಕರ್ನಾಟಕ ಕಾಂಗ್ರೆಸ್ ನ ರಾಜ್ಯಾಧ್ಯಕ್ಶರಾಗಿರುವ ಪರಮೇಶ್ವರಪ್ಪನವರಾಡಿದ ಮಾತು.ವಾಜಪೇಯಿಯವರ ಕಾಲ ಕೆಳಗೆ ನೂರಲು ಯೋಗ್ಯತೆಯಿಲ್ಲದ ಹೊಲಸು ಕಾಂಗ್ರೆಸ್ ಮುಖಂಡರುಗಳಿಗೆ ಇನ್ನು ವಾಜಪೇಯಿಯವರ ಹೆಸರೆತ್ತಲು ಏನೇನೂ ಅಧಿಕಾರವಿಲ್ಲ. ೬೮ ವರ್ಷಗಳ ಹಿಂದೆ ಇದೇ ದಿನ ನಿಧನರಾದ ಗಾಂಧೀಜಿಯವರಿಗೆ ಪುಷ್ಪವೃಷ್ಟಿ ಸುರಿಸಿ ಕಂಬಳಿಹುಳುವಿನಂತಿರುವ ತನ್ನ ೪ ಇಂಚು ಹುರಿಮೀಸೆಯಡಿಯಲ್ಲಿ ಮಾತನಾಡಿದ ಪರಮೇಶ್ವರಪ್ಪನವರಿಗೆ ಗೌರವ ಡಾಕ್ಟರೇಟು ನೀಡಲೇಬೇಕು!!.ಎಪ್ಲಿಕೇಶನ್ ಸಲ್ಲಿಸಲು ಹೊರಡಲಿ.
      ಇಂತಹ ಮೂರ್ಖ ರಾಜಕಾರಣಿಗಳು ನಮ್ಮ ದೇಶಕ್ಕಂಟಿದ ಸಾಂಕ್ರಾಮಿಕ ರೋಗರುಜಿನಗಳು.ಇವರನ್ನು ಸಂಪೂರ್ಣವಾಗಿ ನಾಶ ಮಾಡದೇ ಇದ್ದಲ್ಲಿ ನಮ್ಮ ದೇಶವನ್ನು ನಾಶ ಮಾಡುತ್ತಾರೆ.ಹೆಂಡತಿ ಮಕ್ಕಳನ್ನು ನೋಡಿಕೊಳ್ಳಲು ಬಾರದ ಇವರಿಗೆ ಇನ್ನು ಮುಖ್ಯಮಂತ್ರಿಯಾಗುವ ಕನಸು!.
      ಯಾರಿಗೆ ಏನು ಯೋಗ್ಯತೆಯಿದೆಯೋ ಅದಕ್ಕೆ ತಕ್ಕಂತೆ ಜನಸಾಮಾನ್ಯರು ಆರಿಸಿ ಕಳುಹಿಸುತ್ತಾರೆ.ಸಿಕ್ಕಿದ ಸ್ಥಾನಕ್ಕೆ ಮರ್ಯಾದೆ ಕೊಟ್ಟು ಕೆಲಸ ಮಾಡಲಿ.ಇಲ್ಲದಿದ್ದರೆ ಮನೆಯಲ್ಲಿ ಕುಳಿತು ಹೆಂಡತಿಗೆ ಅಡುಗೆಗೆ ಸಹಾಯ ಮಾಡಲಿ.